Quantcast
Channel: Lifestyle, Latest Trends- ಟ್ರೆಂಡ್ಸ್, ಜೀವನಶೈಲಿ
Viewing all articles
Browse latest Browse all 6221

ತಿಪ್ಪಜ್ಜಿ ಸರ್ಕಲ್: ಮನಪರಿವರ್ತನೆ ಮಾಡುವ ತಿಪ್ಪಜ್ಜಿ

$
0
0

ಕನ್ನಡ ಚಿತ್ರ

* ಪದ್ಮಾ ಶಿವಮೊಗ್ಗ ಕಾದಂಬರಿಕಾರ ಬಿ.ಎಲ್ ವೇಣು ಬರೆದ ಕತೆ 'ತಿಪ್ಪಜ್ಜಿ ಸರ್ಕಲ್' ಸಿನಿಮಾ ಆಗಿ ತೆರೆಕಂಡಿದೆ. ತಿಪ್ಪಜ್ಜಿ ಎಂಬ ದೇವದಾಸಿಯ ಜೀವನ ಕತೆಯ ಮೂಲ ಸತ್ವಕ್ಕೆ, ನೈಜತೆಗೆ ಧಕ್ಕೆ ಬರದಂತೆ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಆದಿತ್ಯ ಚಿಕ್ಕಣ್ಣ. ಮನರಂಜನೆಗಾಗಿ ಮಾತ್ರ ಸಿನಿಮಾ ನೋಡದೆ, ಸಮಾಜದಲ್ಲಿ ತುಚ್ಛವಾಗಿ ಕಾಣಲ್ಪಡುವ ದೇವದಾಸಿ ಹೆಣ್ಣು ಕೂಡಾ ಹೇಗೆ ಉತ್ತಮಳಾಗಿರುತ್ತಾಳೆ ಎಂಬುದನ್ನು ಅರಿಯಲು ತಿಪ್ಪಜ್ಜಿ ಸರ್ಕಲ್ ಚಿತ್ರವನ್ನು ನೋಡಬೇಕು.

ಚಿತ್ರದುರ್ಗದಲ್ಲಿ ಒಂದು ಸರ್ಕಲ್‌ಗೆ ತಿಪ್ಪಜ್ಜಿ ಸರ್ಕಲ್ ಎಂದು ಹೆಸರಿಡಲಾಗಿದೆ. ಈ ತಿಪ್ಪಜ್ಜಿ ಇನ್ಯಾರೂ ಅಲ್ಲ. ಓರ್ವ ದೇವದಾಸಿ. ಆಕೆ ಸತ್ತ ನಂತರ ಸರ್ಕಲ್‌ಗೆ ಹೆಸರನ್ನಿಡಲಾಗಿದೆ. ದೇವದಾಸಿ ಬದುಕು ಎಂಥಾದ್ದು ಎಂಬುದು ಅರಿವಿಗೆ ಬರುವ ಮೊದಲೇ ವಯಸ್ಸಾದ, ವಿವಾಹಿತ ಸಾಹುಕಾರನಿಗೆ ನಗುನಗುತ್ತಲೇ ದೇವದಾಸಿಯಾಗುತ್ತಾಳೆ. ಅವರಿಗೊಬ್ಬಳು ಮಗಳೂ ಹುಟ್ಟುತ್ತಾಳೆ. ಪ್ರೀತಿ ತುಂಬಿದ, ಸುಂದರ ಸಂಸಾರ ಅವರದಾಗುತ್ತದೆ. ತಿಪ್ಪಿ ತನನ್ನು ಬಯಸಿದ ಸಲೀಂ ಮತ್ತು ದಾಸರಿಗೆ ಒಳ್ಳೆಯ ಮಾತಿನಲ್ಲೇ ಅರಿವು ಮೂಡಿಸುತ್ತಾಳೆ. ಅವರು ಕೊನೆವರೆಗೆ ಸ್ನೇಹಿತರಾಗಿ ಅವಳ ಬೆನ್ನಿಗೆ ನಿಲ್ಲುತ್ತಾರೆ. ಊರ ಜನರಿಗೆ ಸಹಾಯ ಮಾಡುತ್ತಾಳೆ. ಕಲಾವಿದರನ್ನು ಪೋಷಿಸುತ್ತಾಳೆ. ಗಂಗೆ ಅಪ್ಪ ಅಮ್ಮನ ನಡುವಿನ ಸಂಬಂಧಕ್ಕೆ ಸಮಾಜ ಗೌರವ ಕೊಡುತ್ತಿಲ್ಲವೆಂದಾಗ ತಾನೂ ದ್ವೇಷಿಸುತ್ತಾಳೆ. ಮಗಳಿಗಾಗಿ ತಿಪ್ಪಿ ತಾನು ಅತಿಯಾಗಿ ಪ್ರೀತಿಸುವ ಸಾಹುಕಾರನನ್ನು ದೂರ ಇಡುತ್ತಾಳೆ. ಗಂಗೆ ಪ್ರೀತಿಸಿದವನಿಗೆ ತನ್ನ ಮನೆ, ಒಡವೆ ಆಸ್ತಿಗಳನ್ನು ವರದಕ್ಷಿಣೆಯಾಗಿ ಕೊಟ್ಟು ಮದುವೆ ಮಾಡುತ್ತಾಳೆ ತಿಪ್ಪಿ. ಮದುವೆಯಾದ ಮೇಲೆ ತಾಯಿಯನ್ನು ದೂರವಿಡುತ್ತಾಳೆ. ಇತ್ತ ಮನೆಯನ್ನೂ ಕಳೆದುಕೊಂಡ ತಿಪ್ಪಮ್ಮ ಚಿಕ್ಕದೊಂದು ಅಂಗಡಿಯನ್ನಿಟ್ಟುಕೊಂಡು ಒಂಟಿಯಾಗಿ ಜೀವನ ಸಾಗಿಸುತ್ತಾಳೆ. ತನಗೆ ಸಿಕ್ಕ ಅನಾಥಳಾದ ಪುಟ್ಟ ಹುಡುಗಿಯನ್ನು ಮಗಳಂತೆ ಬೆಳೆಸುತ್ತಾಳೆ. ಅತ್ತ ಸಾಹುಕಾರ ಸಂಸಾರದಲ್ಲೂ ತಿಪ್ಪಿಯ ಕಾರಣಕ್ಕೆ ನಿಕೃಷ್ಟವಾಗಿ ಕಾಣಲ್ಪಡುತ್ತಾನೆ. ವೃದ್ಧಾಪ್ಯದಲ್ಲಿರುವಾಗ ಇವರ ಬದುಕು ಹೇಗಿರುತ್ತದೆ ಎಂಬುದನ್ನು ತೋರಿಸಲಾಗಿದೆ. ಸಂಭಾಷಣೆ ಉತ್ತಮ. ಕೆಲ ನ್ಯೂನತೆಗಳನ್ನು ಹೊರತುಪಡಿಸಿದರೆ ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದ್ದಾರೆ ಆದಿತ್ಯ ಚಿಕ್ಕಣ್ಣ.

ಚಿತ್ರದಲ್ಲಿ ದೇವದಾಸಿ ತಿಪ್ಪಿ ಮತ್ತು ಸಾಹುಕಾರನ ನಡುವಿನ ಪ್ರೀತಿಯಲ್ಲಿರುವ ತೀವ್ರತೆ, ತಿಪ್ಪಿ ಮತ್ತು ಸಲೀಂ ನಡುವೆ ಇರುವ ಪ್ರೀತಿಯನ್ನು ಮೀರಿದ ಸ್ನೇಹ, ಕೊನೆಗೆ ಸಮಾಜ ಗೌರವಿಸಿದರೂ ಹೆತ್ತ ಮಗಳೇ ಹೇಗೆ ಅಗೌರವದಿಂದ ಕಾಣುತ್ತಾಳೆ ಎನ್ನುವುದು..ಹೀಗೆ ಹಲವು ರೀತಿಯ ಭಾವನಾತ್ಮಕ ಸಂಬಂಧಗಳ ಬಗ್ಗೆ ಚಿತ್ರ ಹೇಳುತ್ತದೆ. ಹಲವು ದಶಕಗಳ ಹಿಂದಿನ ಜೀವನ ಕತೆಯನ್ನು ಅದೇ ರೀತಿ ಚಿತ್ರಿಸುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ. ತಿಪ್ಪಿ ಪಾತ್ರದಲ್ಲಿ ಪೂಜಾ ಗಾಂಧಿಯಿಂದ ನಟನೆ ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ ನಿರ್ದೇಶಕ. ಸಾಹುಕಾರ ಪಾತ್ರದಲ್ಲಿ ಸುರೇಶ್ ಶರ್ಮಾ ಮತ್ತು ಹೊಸ ನಟರ ಅಭಿನಯ ಸಪ್ಪೆ. ಸಲೀಂ ಆಗಿ ಶ್ರೀನಿವಾಸ್‌ಮೂರ್ತಿ ಮತ್ತು ದಾಸನ ಅಭಿನಯ ಮನಸೆಳೆಯುತ್ತದೆ. ಕಲಾತ್ಮಕ ಚಿತ್ರಕ್ಕೆ ಕಮರ್ಷಿಯಲ್ ಟಚ್ ಕೊಡೋದಕ್ಕಾಗಿಯೇ ಸೇರಿಸಿರುವ ಹಾಡಿಗೆ ಉಕ್ರೇನ್ ಡ್ಯಾನ್ಸರ್ ಆ್ಯನ್ನಾರನ್ನು ಕರೆಸಿದ್ದು, ರತಿ ಮನ್ಮಥರ ರಾಸ ಲೀಲೆ ಐಟಂ ಹಾಡನ್ನು ಬಯಸುವವರನ್ನು ತಣಿಸುತ್ತದೆ. ಆದರೆ, ಇದು ಚಿತ್ರವನ್ನು ಡೈಲ್ಯೂಟ್ ಮಾಡಿದೆ. ಕೊನೆಯ ಎರಡು ಹಾಡುಗಳಿಗೆ ಕತ್ತರಿ ಹಾಕಬಹುದಿತ್ತು. ಚಿತ್ರದಲ್ಲಿ ನೆಗೆಟಿವ್ ಕ್ಯಾರೆಕ್ಟರ್‌ಗಳನ್ನು ನಿರ್ಲಕ್ಷಿಸಿ, ಪಾಸಿಟಿವ್ ಆಗಿ ಯೋಚಿಸುವಂತೆ ಮಾಡಿರುವುದು ಚಿತ್ರದ ಹೆಗ್ಗಳಿಕೆ. ಕಲಾ ನಿರ್ದೇಶಕ ಜಿ. ಮೂರ್ತಿ ಪ್ರಶಂಸಾರ್ಹರು.


Viewing all articles
Browse latest Browse all 6221


<script src="https://jsc.adskeeper.com/r/s/rssing.com.1596347.js" async> </script>