ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿದ್ದು, ಅತಿ ಭಯಾನಕವಾದ ಈ ಪ್ರಕರಣದಲ್ಲಿ ನ್ಯಾಯ ದೊರೆಯುವುದೇ ಎಂಬ ಕುರಿತು ಖಾತರಿ ಇಲ್ಲ ಎಂದು ಸಚಿವೆ ಹೇಳಿದರು.
ಬಾಲಾಪರಾಧಿ ಬಿಡುಗಡೆಗೊಂಡ ಬಳಿಕ ಆತನ ವಿಚಾರದಲ್ಲಿ ಬಿಗಿ ನಿಗಾ ವಹಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳ ಜತೆ ಈ ವಿಷಯ ಚರ್ಚಿಸುವುದಾಗಿ ಅವರು ತಿಳಿಸಿದರು.
ದೋಷಿಯ ಬಿಡುಗಡೆ ಸನ್ನಿಹಿತವಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು ''ಅಪರಾಧ ಮಾಡುವಾಗ ಆತ ಅಪ್ರಾಪ್ತ ವಯಸ್ಕನಾಗಿದ್ದ. ಹೀಗಾಗಿ ಅವನನ್ನು ಬಿಡುಗಡೆಗೊಳಿಸುವಂತೆ ಕಾನೂನು ಹೇಳುತ್ತದೆ. ಅದರಂತೆ ಬಿಡುಗಡೆಗೊಳ್ಳುತ್ತಿದ್ದಾನೆ. ಆತ ಮತ್ತೊಂದು ಅಪರಾಧ ಮಾಡುವವರೆಗೆ ನಾವು ಏನೂ ಮಾಡಲಾಗುವುದಿಲ್ಲ . ನಾವು ನ್ಯಾಯ ಮತ್ತು ಕಾನೂನು ಜತೆಗಿನ ಗೊಂದಲಕ್ಕೆ ಸಿಲುಕುವುದು ಬೇಡ. ಇದೊಂದು ಅಸಂಗತ ವಿಚಾರವಾಗಿದ್ದು, ಸರಿಪಡಿಸಿಕೊಳ್ಳಲು ಪ್ರಯತ್ನಿಸಬೇಕಿದೆ ,''ಎಂದರು.
ಸರಕಾರವು ಆತ ಮತ್ತೊಂದು ಅಪರಾಧ ಮಾಡುವುದಕ್ಕೆ ಕಾಯುತ್ತಿದೆಯೇ ಎಂಬ ಪ್ರಶ್ನೆಗೆ, ''ಹೌದು, ನನಗೆ ಆ ಭಯವಿದೆ.ನಾವು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗಿರುವ ವ್ಯಕ್ತಿ ಆತ. ಅವನು ಏನಾದರೂ ಮಾಡಿಕೊಳ್ಳಲಿ ಎಂದು ನಾವು ಬಿಟ್ಟು ಬಿಡುವಂತಿಲ್ಲ . ಈ ವಿಚಾರದಲ್ಲಿ ಅಧಿಕಾರಿಗಳ ಜತೆ ಮಾತನಾಡುವೆ,''ಎಂದು ಸಚಿವೆ ಹೇಳಿದರು.
2012ರ ಡಿಸೆಂಬರ್ನಲ್ಲಿ ಕೃತ್ಯದಲ್ಲಿ ಭಾಗಿಯಾಗಿದ್ದಾಗ ಆತನಿಗೆ 17 ವರ್ಷವಾಗಿತ್ತು. ಸುಧಾರಣಾ ಕೇಂದ್ರದಲ್ಲಿ ಮೂರು ವರ್ಷ ಕಳೆಯುವಷ್ಟರಲ್ಲಿ 21 ವರ್ಷವಾಗುತ್ತಿದ್ದು, ಬಿಡುಗಡೆಗೊಳ್ಳಲಿದ್ದಾನೆ. ರುತ್ತದೆ.
ಹೊಸದಿಲ್ಲಿ: ಮುಂದಿನ ತಿಂಗಳು ಸುಧಾರಣಾ ಕೇಂದ್ರದಿಂದ ಬಿಡುಗಡೆಯಾಗಲಿರುವ ನಿರ್ಭಯಾ ಪ್ರಕರಣದ ಬಾಲಾಪರಾಧಿಗೆ ಕಠಿಣ ಶಿಕ್ಷೆ ಯಾಗಬೇಕೆಂಬ ವಿಚಾರದಲ್ಲಿ ಸಚಿವೆ ಮೇನಕಾ ಗಾಂಧಿ ಸೋಮವಾರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.