ಹೊಸದಿಲ್ಲಿ: ಕೇಂದ್ರ ಸರಕಾರದ ಸಂದೇಹ ನಿಜವಾಗಿದೆ. ಒನ್ ರ್ಯಾಂಕ್ ಒನ್ ಪೆನ್ಶನ್ ಯೋಜನೆಯನ್ನು ತಮಗೂ ಜಾರಿಗೊಳಿಸುವಂತೆ ಆಗ್ರಹಿಸಿ ಅರೆಸೇನಾ ಪಡೆಗಳ ನಿವೃತ್ತ ಯೋಧರು ಪ್ರತಿಭಟನೆ ಆರಂಭಿಸಿದ್ದಾರೆ.
ನಿವೃತ್ತ ಸೈನಿಕರಿಗೆ ಒನ್ ರ್ಯಾಂಕ್ ಒನ್ ಪೆನ್ಶನ್ ಯೋಜನೆ ಜಾರಿಗೊಳಿಸಿದರೆ ಭದ್ರತಾ ಪಡೆಗಳ ಇತರ ವಿಭಾಗಗಳೂ ತಮಗೂ ಸೌಲಭ್ಯ ನೀಡುವಂತೆ ಪಟ್ಟು ಹಿಡಿಯಬಹುದು ಎಂದು ಕೇಂದ್ರ ಸರಕಾರ ಈ ಮೊದಲು ಸಂದೇಹ ವ್ಯಕ್ತಪಡಿಸಿತ್ತು.
ತಮ್ಮನ್ನೂ ನಿವೃತ್ತ ಸೈನಿಕರೆಂದು ಪರಿಗಣಿಸಿ, ಅವರಿಗೆ ಯಾವ ಯಾವ ಸವಲತ್ತುಗಳಿವೆಯೋ ಅದೆನ್ನಲ್ಲವನ್ನೂ ನೀಡಬೇಕು ಎಂದು ಒತ್ತಾಯಿಸಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್), ಗಡಿ ಭದ್ರತಾ ಪಡೆ(ಬಿಎಸ್ಎಫ್), ಭಾರತ-ಟಿಬೇಟ್ ಗಡಿ ಪೊಲೀಸ್(ಐಟಿಬಿಪಿ), ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ(ಸಿಐಎಸ್ಎಫ್) ಮತ್ತು ಸಶಸ್ತ್ರ ಸೀಮಾ ಬಲಗಳ ನಿವೃತ್ತ ಅಧಿಕಾರಿಗಳ ಒಕ್ಕೂಟ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. ಅಷ್ಟೇ ಅಲ್ಲ ಹೊಸದಿಲ್ಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆಯನ್ನೂ ಆರಂಭಿಸಿದೆ.
-ಒನ್ ರಾಂಕ್ ಒನ್ ಪೆನ್ಶನ್-