ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಿರುವ ಕಾರಣ ನೀಡಿ ದಿವಾಕರ್ ಬ್ಯಾನರ್ಜಿ ಮುಂತಾದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕಲಾವಿದರು ಸರಕಾರ ನೀಡಿರುವಂಥ ಪ್ರಶಸ್ತಿಯನ್ನು ವಾಪಸ್ ನೀಡುತ್ತಿರುವ ಸಂದರ್ಭದಲ್ಲಿ ಶಾರೂಖ್ ಈ ಹೇಳಿಕೆ ನೀಡಿದ್ದಾರೆ.
'2005ರಲ್ಲಿ ಪಡೆದ ಪದ್ಮಶ್ರೀ ಸೇರಿದಂತೆ ಇನ್ನಿತರ ಪ್ರಶಸ್ತಿಗಳನ್ನು ವಾಪಸ್ ನೀಡುವುದಿಲ್ಲ,' ಎಂದು 50ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಆಯೋಜಿಸಿದ್ದ ಟ್ವಿಟರ್ ಟೌನ್ಹಾಲ್ನಲ್ಲಿ ಶಾರೂಖ್ ಖಾನ್ ಸೋಮವಾರ ಹೇಳಿದ್ದಾರೆ.
ವಿದ್ಯಾ, ಖೇರ್ ಕಿಡಿಕಾರಿದ್ದರು:
ಬಾಲಿವುಡ್ ನಟಿ ವಿದ್ಯಾಬಾಲನ್, ಹಿರಿಯ ನಟ ಅನುಪಮ್ ಖೇರ್ ಪ್ರಶಸ್ತಿ ವಾಪಸ್ ಮಾಡುತ್ತಿರುವ ಬಗ್ಗೆ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು.
'ನನ್ನನ್ನು ಗೌರವಿಸಿ ಸನ್ಮಾನಿಸಿರುವುದು ದೇಶ, ಸರ್ಕಾರವಲ್ಲ. ಹೀಗಾಗಿ ಪ್ರಶಸ್ತಿಯನ್ನು ನಾನು ವಾಪಸ್ ಮಾಡುವುದಿಲ್ಲ ಎಂದು ವಿದ್ಯಾ ಹೇಳಿದ್ದರು. 2012ರಲ್ಲಿ ಡರ್ಟಿ ಪಿಕ್ಚರ್ ಸಿನಿಮಾ ನಟನೆಗಾಗಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆಕಿತ್ತು.
'ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಸಾಹಿತಿಗಳು ಹಾಗೂ ನಿರ್ದೇಶಕರು ಕೆಲವು ರಾಜಕೀಯ ಪಕ್ಷಗಳ ಕೈಗೊಂಬೆಯಾಗಿದ್ದಾರೆ. ಪ್ರಶಸ್ತಿ ವಾಪಸ್ ನೀಡುವ ಮೂಲಕ ಅವರನ್ನು ಆಯ್ಕೆ ಮಾಡಿದ ಮಂಡಳಿಯ ಸದಸ್ಯರನ್ನು ಅಗೌರವಿಸುತ್ತಿದ್ದಾರೆ,' ಎಂದು ಅನುಪಮ್ ಖೇರ್ ಕಿಡಿಕಾರಿದ್ದರು.
ಮುಂಬಯಿ: 'ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದೆ. ಸರಕಾರದ ಪ್ರಶಸ್ತಿ ವಾಪಸ್ ಮಾಡಿರುವವರ ಬಗ್ಗೆಯೂ ಗೌರವವಿದೆ. ಆದರೆ, ನಾನು ಹಿಂದಿರುಗಿಸುವುದಿಲ್ಲ,' ಎಂದು ಶಾರುಖ್ ಖಾನ್ ಹೇಳಿದ್ದಾರೆ.