Quantcast
Channel: Lifestyle, Latest Trends- ಟ್ರೆಂಡ್ಸ್, ಜೀವನಶೈಲಿ
Viewing all articles
Browse latest Browse all 6221

‘ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಿ’

$
0
0

ಹುನಗುಂದ: ಮನೆಯಲ್ಲಿನ ತಾಯಿ, ತಂದೆ ಮತ್ತು ಹಿರಿಯರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಿ ಎಂದು ಹಿರಿಯ ದಿವಾಣಿ ನ್ಯಾಯಧೀಶ ಎಂ.ಎಚ್.ಶಿರವಾಳಕರ್ ಹೇಳಿದರು.

ತಾಲೂಕು ಕಾನೂನು ಸೇವಾ ಸಮೀತಿ, ವಕೀಲರ ಸಂಘ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಸೇವಾ ಸಂಸ್ಥೆ ಸಹಯೋಗದಲ್ಲಿ ಇಲ್ಲಿಯ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಜರುಗಿದ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಗೌರವ ಸಿಗಬೇಕಾದರೆ ಹಿರಿಯರನ್ನು ವೃದ್ಧಾಶ್ರಮಗಳಲ್ಲಿ ಬಿಡದೇ ಪ್ರೀತಿ, ವಿಶ್ವಾಸದಿಂದ ಕಾಣಿ ಎಂದರು.

ಪ್ರಧಾನ ದಿವಾಣಿ ನ್ಯಾಯಾಧೀಶ ಮೊಹಮ್ಮದ್ ಮೋಯಿನುದ್ದೀನ್, ಅಪರ ದಿವಾಣಿ ನ್ಯಾಯಾಧೀಶ ಶಿವರಾಜ ಸಿದ್ಧೇಶ್ವರ, ಎಸ್.ಜಿ.ಗುರುನಂಜನಮಠ, ಹಿರಿಯ ವಕೀಲ ಎಸ್.ಎಸ್.ತಾರಿವಾಳ ಮಾತನಾಡಿದರು.

ಹಿರಿಯ ವಕೀಲ ವಿ.ಆರ್.ಜನಾದ್ರಿ ಅವರು ಹಿರಿಯ ನಾಗರಿಕರು ಮತ್ತು ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು. ತಹಸೀಲ್ದಾರ್ ಸುಭಾಸ್ ಸಂಪಗಾವಿ ಅಧ್ಯಕ್ಷತೆವಹಿಸಿದ್ದರು. ಜಿ.ವಿ.ದೇಶಪಾಂಡೆ ಮಾತನಾಡಿದರು. ತಳ್ಳಿಕೇರಿ, ಸಿ.ಬಿ.ಸಜ್ಜನ, ದೇಸಾಯಿ, ಹುನಗುಂದ ಪುರಸಭೆ ಮುಖ್ಯಾಧಿಕಾರಿ ಮಹದೇವ ಬಿಸೆ ಇದ್ದರು.

ಇದೇ ಸಂದರ್ಭದಲ್ಲಿ ಹಲವು ಹಿರಿಯ ನಾಗರಿಕರಿಗೆ ಸಂಧ್ಯಾ, ಸುರಕ್ಷಾ ಪಿಂಚಣಿಯ ಪ್ರಮಾಣ ಪತ್ರ ವಿತರಿಸಲಾಯಿತು. ಜಿ.ಎಂ.ತಾರಿವಾಳ ನಾಡಗೀತೆ ಹಾಡಿದರು. ಭೈರಗೊಂಡ ಪ್ರಾಸ್ತಾವಿಕ ಮಾತನಾಡಿದರು. ವಕೀಲ ಎಂ.ಬಿ.ದೇಶಪಾಂಡೆ ಸ್ವಾಗತಿಸಿದರು. ಸಿದ್ದು ಸಜ್ಜನ ನಿರೂಪಿಸಿದರು. ಬಿ.ಎ.ಶಿವಣಗಿ ವಂದಿಸಿದರು.














Viewing all articles
Browse latest Browse all 6221


<script src="https://jsc.adskeeper.com/r/s/rssing.com.1596347.js" async> </script>